ನನ್ನ ಕನಸಿನ ಭಾರತ ಪ್ರಬಂಧ

ನನ್ನ ಕನಸಿನ ಭಾರತ ಪ್ರಬಂಧ:

ಈ ಲೇಖನದಲ್ಲಿ ನನ್ನ ಕನಸಿನ ಭಾರತವನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ.ನಮ್ಮ ಪ್ರಜೆಗಳಯ ನಮ್ಮ ದೇಶವನ್ನು ನೈರ್ಮಲ್ಯದಿಂದ ಕಾಪಾಡುವುದರ ಜೊತೆಗೆ ಸ್ರೀಯರಿಗೆ ಸ್ವಾತಂತ್ರವನ್ನು ನೀಡಬೇಕು ಎಂದು ಒದುಗರಿಗೆ ಅರ್ಥವಾಗುವಂತೆ ವಿವರಿಸಿದ್ದೇವೆ.

ಪೀಠಿಕೆ:

ನನ್ನ ಕನಸಿನ ಭಾರತವು ಮಹಿಳೆಯರು ಸುರಕ್ಷಿತವಾಗಿ ಮತ್ತು ಸ್ವಾತಂತ್ರರಾಗಿ ನಮ್ಮ ದೇಶದಲ್ಲಿ ಬದುಕುವಂತೆ ಅಗಲಿ. ಪ್ರತಿಯೊಬ್ಬರೂ ತಮ್ಮ ದೇಶವನ್ನು ಯಶಸ್ವಿಯಾಗಲು ಕನಸುಗಳನ್ನು ಹೊಂದಿರುತ್ತಾರೆ. ಎಲ್ಲಾ ಜಾತಿ ಮತ್ತು ಮತಗಳು ಸಮಾನತೆ ಇರುವ ದೇಶವು ಪ್ರಗತಿಗೆ ಸಾಕ್ಷಿಯಾಗುತ್ತದೆ.ನಮ್ಮ ದೇಶದಲ್ಲಿ ಜಾತಿ, ಬಣ್ಣ, ಲಿಂಗ ಮತ್ತು ಆರ್ಥಿಕ ಸ್ಥಿತಿಯ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಸಮಾನಂತೆ ಕಾಣುವುದು.

ಮಹಿಳೆಯರಿಗೆ ಸ್ವಾತಂತ್ರ:

ಈ ಸಮಾಜದಲ್ಲಿ ಮಹಿಳೆಯರಿಗೆ ಅವರದೇ ಆದ ಗೌರವ ಸ್ಥಾನಮಾನಗಳು ನೀಡವುದು,ಮಹಿಳೆಯರ ವಿರುದ್ಧ ಸಾಕಷ್ಟು ತಾರತಮ್ಯವಿದೆ. ಈಗ ಮಹಿಳೆಯರು ಮನೆಯಿಂದ ಹೊರಬಂದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲು ಮುಂದಾಗುತ್ತಿದ್ದಾರೆ. ಜೊತೆಗೆ ಹೆಣ್ಣು ಭ್ರೂಣಹತ್ಯೆ ಮತ್ತು ಹೆಣ್ಣನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸುವುದು ಕಡಿಮೆ ಮಾಡಬೇಕು.

ಸಮಾಜದ ಮನಸ್ಥಿತಿಯನ್ನು ಬದಲಾಯಿಸಲು ನಾವು ಶ್ರಮಿಸಬೇಕು ನನ್ನ ಕನಸಿನ ಭಾರತ ಮಹಿಳೆಯರನ್ನು ಸಮಾನ ಮಟ್ಟದಲ್ಲಿ ಇರಿಸಲು ಬಯಸುತೇನೆ. ಮಹಿಳೆಯರು ಸುರಕ್ಷಿತವಾಗಿ ಮತ್ತು ರಸ್ತೆಯಲ್ಲಿ ಮುಕ್ತವಾಗಿ ನಡೆಯುವಂತೆ ನಮ್ಮ ದೇಶವಾಗಲಿ. ಮಹಿಳೆಯರಿಗೆ ಸ್ವಾತಂತ್ರರಾಗಿರುವಂತೆ ಅಗಲಿ.

ಭಾರತದಲ್ಲಿ ಸಾಕಷ್ಟು ವಿದ್ಯಾವಂತ ಮಹಿಳೆಯರು ಇದ್ದಾರೆ ಅದರೆ ಭ್ರಷ್ಟಾಚಾರ ಮತ್ತು ಇತರ ಹಲವು ಕಾರಣಗಳಿಂದ ಅವರು ಯೋಗ್ಯವಾದ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಈ ಉದ್ಯೋಗ ಅವಕಾಶಗಳು ಸಿಗಬೇಕು.

ಮಹಿಳೆಯರು ಮನೆಯಿಂದ ಹೊರಬಂದು ಎಲ್ಲರೂ ಶಿಕ್ಷಣವನ್ನು ಪಡೆಯುವಂತೆ ಅಗಬೇಕು. ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು.

ಉದ್ಯೋಗಗಳು:

೧. ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಉತ್ತಮವಾದ ಕೆಲಸದ ಅಗತ್ಯವಿರುತ್ತದೆ. ಅವರ ಅರ್ಹತೆಗೆ ಸಾರಿಯಾದ ಕೆಲಸಗಳು ಸೀಗುವಂತೆ ಅಗಬೇಕು.

೨. ದೇಶದ ದುರ್ಬಲ ಕೈಗಾರಿಕಾ ಬೆಳವಣಿಗೆಯೂ ಇದಕ್ಕೆ ಒಂದು ಕಾರಣ, ಜೊತೆಗೆ ಮೀಸಲಾತಿಯು ಈ ಹಾದಿಯಲ್ಲಿ ಅಡ್ಡಿಯಾಗಿದೆ. ಅರ್ಹ ಅಭ್ಯರ್ಥಿಗಳು ಅದರಿಂದ ತಮ್ಮ ಉತ್ತಮ ಅವಕಾಶವನ್ನು ಕಳೆದುಕೊಳ್ಳತ್ತಾರೆ. ಅವರಿಗೆ ಉತ್ತಮ ಉದ್ಯೋಗಗಳು ನೀಡುವುದು.

೩.ಭಾರತದಲ್ಲಿ ಸಾಕಷ್ಟು ವಿದ್ಯಾವಂತರಿದ್ದರೂ ಭ್ರಷ್ಟಾಚಾರ ಮತ್ತು ಇತರೆ ಕಾರಣದಿಂದ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಅದರಿಂದ ಭಷ್ಟಾಚಾರಗಳ ನಿರ್ಮೂಲನೆ ಅಗಬೇಕು ವಿದ್ಯಾವಂತರಿಗೆ ಉದೋಗ ನೀಡಬೇಕು.

ಉತ್ತಮ ಮೂಲಸೌಕರ್ಯ:

೧. ಹಳ್ಳಿ ಜನರಿಗೆ ವಿಶೇಷವಾಗಿ ಅವರಿಗೆ ಮನೆಗಳು ಕಟ್ಟಲು ಸರ್ಕಾರದಿಂದ ಹಣದ ರೂಪದಲ್ಲಿ ಸಹಾಯ ಮಾಡುವುದು.ಅವರ ಜೀವನಕ್ಕೆ ಅನುಕೂಲವಾಗುತ್ತದೆ.ಸುಂದರವಾದ ಜೀವನ ನೆಡೆಸಲು ಸಾದ್ಯವಾಗುತ್ತದೆ.ಸರ್ಕಾರದ ಸಹಾಯದಿಂದ ಅವರ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ.

೨. ಮಹಿಳೆಯರಿಗೆ ಬಯಲು ಶೌಚ ಮಾಡುವುದು ಅವರಿಗೆ ಹಿಂಸೆಯಾಗುತ್ತದೆ. ಸರ್ಕರದ ಸಹಾಯದಿಂದ ಬಯಲು ಶೌಚ ನಿಲ್ಲಿಸುವಂತೆ ಮಾಡುವುದು, ಹಾಗೆ ಅವರಿಗೆ ಉತ್ತಮ ಶೌಚಲಯದ ವ್ಯವಸ್ಥೆ ಮಾಡುವುದು.

೩. ಮಹಿಳೆಯರ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡುವುದು. ಸರ್ಕಾರದಿಂದ ಉಚಿತ ವಸತಿ ಮತ್ತು ಊಟ ನೀಡುವುದು. ಬಡವರಿಗೆ ತರಗತಿ ಶುಲ್ಕ ಕಡಿಮೆ ಮಾಡುವುದು.

೪. ಬಡವರ ಜೀವನಕ್ಕೆ ಬೇಕಾಗುವ ಎಲ್ಲ ಮಾಹಿತಿ ಮತ್ತು ಸವಲತ್ತುಗಳನ್ನು ನೀಡುವುದು, ಅವರ ಜೀವನ ಸುಧಾರಿಸುವಂತೆ ಮಾಡುವುದು.

ನೈರ್ಮಲ್ಯ ಕಾಪಾಡುವುದು:

೧. ಭಾರತದಲ್ಲಿ ಜನಸಂಖ್ಯೆ ಹೆಚ್ಚಾದಂತೆ ನೈರ್ಮಲ್ಯಗಳು ಹೆಚ್ಚಾಗುತ್ತಿದೆ. ನಮ್ಮ ದೇಶ ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ನಮ್ಮ ಸುಂದರವಾದ ದೇಶವನ್ನು ನೈರ್ಮಲ್ಯದಿಂದ ಕಾಪಾಡಬೇಕು.

೨.ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕು, ಸ್ವಚ್ಚತೆಯನ್ನು ಕಾಪಾಡುವ ಜೊತೆಗೆ ಎಲ್ಲರ ಆರೋಗ್ಯವನ್ನು ಕಾಪಾಡುವುದು ಬಹುಮುಖ್ಯವಾಗಿದೆ.

೩.ಹೆಚ್ಚಾಗಿ ಕೊಳಚೆ ಪ್ರದೇಶಗಳು ಕಂಡುಬರುತ್ತಿದೆ ಜೊತೆಗೆ ಮಾಲಿನ್ಯಗಳು ಕೂಡ ಹೆಚ್ಚಾಗುತ್ತಿದೆ. ಆರೋಗ್ಯದ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿದೆ ಸರ್ಕಾರ ಅದರ ಬಗ್ಗೆ ಸಾರಿಯಾದ ಕ್ರಮ ಕೈಗೊಳ್ಳಬೇಕು.

೪. ನೈರ್ಮಲ್ಯವನ್ನು ಕಾಪಾಡುವುದಕ್ಕೆ ಶೌಚಾಲಯದ ವ್ಯವಸ್ಥೆಯನ್ನು ಸರ್ಕಾರ ಒದಗಿಸಬೇಕು.

೫. ಹಸಿ ಕಸ ಮತ್ತು ಒಣ ಕಸಗಳ ವಿಲೇವಾರಿ ಸಾರಿಯಾದ ಮಾರ್ಗದಲ್ಲಿ ಅಗಬೇಕು. ಆಗ ನೈರ್ಮಲ್ಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಉಪಸಂಹಾರ:

ಈ ಮೂಲಕ ತಿಳಿಯುವುದು ಎನೆಂದರೆ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಹಕ್ಕು ನೀಡುವುದು. ಮಹಿಳೆಯರನ್ನು ಗೌರವಿಸುವುದು. ಅವರಿಗೆ ಉತ್ತಮ ಮೂಲ ಸೌಕರ್ಯವನ್ನು ನೀಡುವುದಾಗಿದೆ. ನನ್ನ ಕನಸಿನ ಭಾರತವಾಗಿದೆ.

ಇತರೆ ಪ್ರಬಂಧಗಳು:

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಕನ್ನಡ ಗಾದೆಗಳು ಮತ್ತು ವಿವರಣೆ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ

Leave a Comment