ಮಹಿಳಾ ಸಬಲೀಕರಣ ಪ್ರಬಂಧ

ಕನ್ನಡದಲ್ಲಿ ಮಹಿಳಾ ಸಬಲೀಕರಣ ಪ್ರಬಂಧ ಬರೆಯಿರಿ, Mahila Sabalikaran Prabandha in Kannada, Mahila Sabalikaran Essay in Kannada

ಮಹಿಳಾ ಸಬಲೀಕರಣ ಪ್ರಬಂಧ :

ಈ ಲೇಖನಿಯಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ನೀಡಿದ್ದೇವೆ , ನಿಮಗೆ ಅನುಕೂಲವಾಗುವಂತೆ ಹಾಗೂ ಸಹಾಯವಾಗುವಂತೆ ನಿಮಗೆ ಮಾಹಿತಿ ನೀಡಿದ್ದೇವೆ.

ಪೀಠಕೆ:

ಮಹಿಳಾ ಸಬಲೀಕರಣವು ಮಹಿಳೆ ಮತ್ತು ಸಬಲೀಕರಣ ಎಂಬ ಎರಡು ಪದಗಳಿಂದ ಕೂಡಿದೆ. ಸಬಲೀಕರಣ ಎಂದರೆ ಯಾರಿಗಾದರೂ ಅಧಿಕಾರ ನೀಡುವುದು. ಹಾಗಾಗಿ ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಕೈಯಲ್ಲಿ ಅಧಿಕಾರ. ಯಾವುದೇ ತಾರತಮ್ಯವನ್ನು ಲೆಕ್ಕಿಸದೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡಬೇಕು ಎಂದು ಇದು ಸೂಚಿಸುತ್ತದೆ. ಮಹಿಳಾ ಸಬಲೀಕರಣವು ಮಹಿಳೆಯರನ್ನು ತಮ್ಮನ್ನು ತಾವು ನಿರ್ಧರಿಸುವ ಸಾಮರ್ಥ್ಯವನ್ನು ಮಾಡಲು ಶಕ್ತಿಶಾಲಿಯಾಗಿ ಮಾಡುವುದನ್ನು ಸೂಚಿಸುತ್ತದೆ . ಪುರುಷನ ಕೈಯಿಂದ ಮಹಿಳೆಯರು ಅನೇಕ ವರ್ಷಗಳಿಂದ ಸಾಕಷ್ಟು ಬಳಲುತ್ತಿದ್ದಾರೆ. ಹಿಂದಿನ ಶತಮಾನಗಳಲ್ಲಿ, ಅವರು ಬಹುತೇಕ ಅಸ್ತಿತ್ವದಲ್ಲಿಲ್ಲ ಎಂದು ಪರಿಗಣಿಸಲ್ಪಟ್ಟರು. ಮತದಾನದಷ್ಟೇ ಮೂಲಭೂತವಾದ ಎಲ್ಲ ಹಕ್ಕುಗಳೂ ಪುರುಷರಿಗೆ ಸೇರಿದ್ದಂತೆ. ಕಾಲಾನಂತರದಲ್ಲಿ, ಮಹಿಳೆಯರು ತಮ್ಮ ಶಕ್ತಿಯನ್ನು ಅರಿತುಕೊಂಡರು.

ವಿಷಯ ವಿವರಣೆ:

ನಮ್ಮ ಸಮಾಜವು ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡಿದೆ. ಹಿಂದಿನ ಕಾಲದಲ್ಲಿ, ಪುರುಷರನ್ನು ಕುಟುಂಬದ ಪ್ರಮುಖ ಸದಸ್ಯರೆಂದು ಪರಿಗಣಿಸಲಾಗಿತ್ತು. ಅವರು ಜೀವನೋಪಾಯವನ್ನು ಗಳಿಸುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಕುಟುಂಬದ ನಿರ್ಧಾರ ತೆಗೆದುಕೊಳ್ಳುವವರಾಗಿದ್ದರು. ಮಹಿಳಾ ಸಬಲೀಕರಣವು ಸಮಾಜದಲ್ಲಿ ಸಂತೋಷ ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಮಹಿಳೆಯರಲ್ಲಿ ಶಕ್ತಿಯನ್ನು ಸೃಷ್ಟಿಸುವ ಪ್ರಕ್ರಿಯೆಯಾಗಿದೆ. ಯಾವುದೇ ಮಿತಿ ಮತ್ತು ನಿರ್ಬಂಧಗಳಿಲ್ಲದೆ ಶಿಕ್ಷಣ, ವೃತ್ತಿ, ಜೀವನಶೈಲಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಡೆಯಲು ಸಾಧ್ಯವಾದಾಗ ಮಹಿಳೆಯರು ಸಬಲರಾಗುತ್ತಾರೆ. ಇದು ಶಿಕ್ಷಣ, ಅರಿವು, ಸಾಕ್ಷರತೆ ಮತ್ತು ತರಬೇತಿಯ ಮೂಲಕ ಅವರ ಸ್ಥಾನಮಾನವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಸಹ ಅನುಭವಿಸುತ್ತಾಳೆ.

ಇನ್ನೊಂದು ಕುಟುಂಬದಲ್ಲಿ ಗಂಡಸರು ಮತ್ತು ಹೆಂಗಸರು ಇಬ್ಬರೂ ಸಂಪಾದಿಸುತ್ತಿದ್ದಾರೆ, ಆಗ ಯಾರು ಉತ್ತಮ ಜೀವನಶೈಲಿಯನ್ನು ಹೊಂದಿರುತ್ತಾರೆ. ಉತ್ತರ ಸರಳವಾಗಿದೆ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಹಣವನ್ನು ಗಳಿಸುವ ಕುಟುಂಬ. ಹೀಗಾಗಿ, ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕೆಲಸ ಮಾಡುವ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಸ್ವಾತಂತ್ರ್ಯಾ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆ, ಸುರಕ್ಷತೆಗೆ, ಸ್ವಾಲವಂಬಿ ಜೀವನಕ್ಕೆ ಸಬಲೀಕರಣಕ್ಕೆ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಮಹಿಳಾ ಸಬಲೀಕರಣ ಅವಶ್ಯಕತೆ:

ಬಹುತೇಕ ಎಲ್ಲಾ ದೇಶಗಳು, ಎಷ್ಟೇ ಪ್ರಗತಿಪರವಾಗಿದ್ದರೂ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಇತಿಹಾಸವನ್ನು ಹೊಂದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಪಂಚದಾದ್ಯಂತದ ಮಹಿಳೆಯರು ಇಂದಿನ ಸ್ಥಿತಿಯನ್ನು ತಲುಪಲು ಬಂಡಾಯವೆದ್ದಿದ್ದಾರೆ. ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಪುರಾತನ ಕಾಲದ ಹೆಣ್ಣು ಮಕ್ಕಳ ಗರ್ಭಪಾತಕ್ಕೆ ಸತಿ ಪ್ರಾತಃ ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಇಂತಹ ಹಿಂಸೆಯನ್ನು ಎದುರಿಸುತ್ತಲೇ ಇದ್ದಾರೆ. ಇಷ್ಟು ಮಾತ್ರವಲ್ಲದೆ, ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ, ವರದಕ್ಷಿಣೆ ವ್ಯವಸ್ಥೆ, ಮರ್ಯಾದಾ ಹತ್ಯೆ, ಕೌಟುಂಬಿಕ ದೌರ್ಜನ್ಯ ಇತ್ಯಾದಿ ಘೋರ ಅಪರಾಧಗಳು ಭಾರತದಲ್ಲಿ ನಡೆಯುತ್ತಲೇ ಇವೆ.

ಹೆಣ್ಣು ಮಕ್ಕಳ ಸಾಕ್ಷರತೆ ಪ್ರಮಾಣ ತೀರಾ ಕಡಿಮೆ. ಬಹುತೇಕ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೂ ಇಲ್ಲ. ಇದಲ್ಲದೆ ಅವರು ಬೇಗನೆ ಮದುವೆಯಾಗುತ್ತಾರೆ ಮತ್ತು ಮಕ್ಕಳನ್ನು ಬೆಳೆಸುತ್ತಾರೆ ಮತ್ತು ಮನೆಯ ಕೆಲಸವನ್ನು ಮಾತ್ರ ಮಾಡುತ್ತಾರೆ. ಅವರಿಗೆ ಹೊರಗೆ ಹೋಗಲು ಅವಕಾಶವಿಲ್ಲ ಮತ್ತು ಅವರ ಗಂಡನ ಪ್ರಾಬಲ್ಯವಿದೆ. ಮಹಿಳೆಯರನ್ನು ಪುರುಷರು ತಮ್ಮ ಆಸ್ತಿ ಎಂದು ಪರಿಗಣಿಸುತ್ತಾರೆ. ಕೆಲಸದ ಸ್ಥಳದಲ್ಲೂ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿದೆ.

ಭಾರತದಲ್ಲಿ ಇಂತಹ ಹಲವಾರು ಹಳ್ಳಿಗಳು ಇನ್ನೂ ಇವೆ ಎನ್ನುವುದನ್ನು ನೋಡಿದರೆ ನಮ್ಮ ದೇಶದ ಮಹಿಳೆಯರ ಸ್ಥಿತಿಯನ್ನು ಅಳೆಯಬಹುದು. ಅಲ್ಲಿ ಹೆಣ್ಣಿನ ಬದುಕು ಮನೆಯ ನಾಲ್ಕು ಗೋಡೆಗೆ ಸೀಮಿತವಾಗಿದೆ. ಅಷ್ಟೇ ಅಲ್ಲ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಉದ್ಯೋಗ ಮಾಡುವ ಮಹಿಳೆಯರ ಸಂಖ್ಯೆಯೂ ಕಡಿಮೆ. ನಮ್ಮ ದೇಶದ ಬಹುತೇಕ ವಿದ್ಯಾವಂತ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಈ ಸಮಯದಲ್ಲಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ.ಅವರು ಬಯಸಿದ ಜೀವನ ನೆಡಸಲು ಸಾಧ್ಯವಾಗುತ್ತಿಲ್ಲ.

ಮಹಿಳೆಯರು ಹೆಚ್ಚು ಮುಕ್ತ ಮನಸ್ಸಿನವರಾಗಿದ್ದಾರೆ ಮತ್ತು ಎಲ್ಲಾ ಆಯಾಮಗಳಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಸಾಮಾಜಿಕ ಸಂಕೋಲೆಗಳನ್ನು ಮುರಿಯುತ್ತಿದ್ದಾರೆ. ಆದಾಗ್ಯೂ ಅಪರಾಧವು ಅದರೊಂದಿಗೆ ಹೋಗುತ್ತದೆ.

ಮಹಿಳಾ ಸಬಲೀಕರಣದ ಅನುಷ್ಠಾನದಲ್ಲಿ ಆಚರಣೆಗಳು:

  • ಹಳೆಯ ಮತ್ತು ಸಾಂಪ್ರದಾಯಿಕ ಸಿದ್ಧಾಂತಗಳ ಕಾರಣದಿಂದಾಗಿ, ಭಾರತದ ಅನೇಕ ಪ್ರದೇಶಗಳಲ್ಲಿ ಮಹಿಳೆಯರು ತಮ್ಮ ಮನೆಗಳನ್ನು ತೊರೆಯುವುದನ್ನು ನಿಷೇಧಿಸಲಾಗಿದೆ. ಅಂತಹ ಪ್ರದೇಶಗಳಲ್ಲಿ ಶಿಕ್ಷಣಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಮಹಿಳೆಯರು ಮನೆಯಿಂದ ಹೊರಗೆ ಹೋಗುವ ಸ್ವಾತಂತ್ರ್ಯವನ್ನು ಹೊಂದಿರುವುದಿಲ್ಲ.
  • ಕೆಲಸದ ಸ್ಥಳದಲ್ಲಿ ಶೋಷಣೆಯು ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಅಡಚಣೆಯಾಗಿದೆ. ಖಾಸಗಿ ವಲಯಗಳಾದ ಸೇವಾ ಉದ್ಯಮ, ಸಾಫ್ಟ್‌ವೇರ್ ಉದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಈ ಸಮಸ್ಯೆಯಿಂದ ಹೆಚ್ಚು ಪರಿಣಾಮ ಬೀರುತ್ತವೆ.
  • ಹಳೆಯ ಮತ್ತು ಸಾಂಪ್ರದಾಯಿಕ ಸಿದ್ಧಾಂತಗಳ ಪರಿಸರದಲ್ಲಿ ವಾಸಿಸುವ ಕಾರಣದಿಂದಾಗಿ ಮಹಿಳೆಯರು ತಮ್ಮನ್ನು ಪುರುಷರಿಗಿಂತ ಕಡಿಮೆ ಎಂದು ಪರಿಗಣಿಸಲು ಪ್ರಾರಂಭಿಸುತ್ತಾರೆ ಮತ್ತು ಅವರ ಪ್ರಸ್ತುತ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಾಗುತ್ತಿಲ್ಲ.
  • ಭಾರತದಲ್ಲಿ, ಕೆಲಸದ ಸ್ಥಳದಲ್ಲಿ ಲಿಂಗ ಮಟ್ಟದಲ್ಲಿ ಮಹಿಳೆಯರು ಇನ್ನೂ ತಾರತಮ್ಯಕ್ಕೆ ಒಳಗಾಗುತ್ತಾರೆ. ಅನೇಕ ಪ್ರದೇಶಗಳಲ್ಲಿ, ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೊರಗೆ ಹೋಗಲು ಸಹ ಅನುಮತಿ ನೀಡುವುದಿಲ್ಲ.
  • ಮಹಿಳೆಯರು ಸ್ವತಂತ್ರವಾಗಿ ಕೆಲಸ ಮಾಡಲು ಅಥವಾ ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿಲ್ಲ ಮತ್ತು ಅವರು ಯಾವಾಗಲೂ ಪ್ರತಿ ಕೆಲಸದಲ್ಲಿ ಪುರುಷರಿಗಿಂತ ಕಡಿಮೆ ಎಂದು ಪರಿಗಣಿಸುತ್ತಾರೆ.
  • ಮಹಿಳೆಯರಲ್ಲಿ ಅನಕ್ಷರತೆ ಮತ್ತು ಶಿಕ್ಷಣದಿಂದ ಹೊರಗುಳಿಯುವಂತಹ ಸಮಸ್ಯೆಗಳು ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಅಡಚಣೆಗಳಾಗಿವೆ. ನಗರ ಪ್ರದೇಶದ ಹೆಣ್ಣುಮಕ್ಕಳು ವಿದ್ಯಾಭ್ಯಾಸದಲ್ಲಿ ಗಂಡುಮಕ್ಕಳಿಗೆ ಸರಿಸಾಟಿಯಲ್ಲಿದ್ದರೂ ಗ್ರಾಮೀಣ ಪ್ರದೇಶದಲ್ಲಿ ತೀರಾ ಹಿಂದುಳಿದಿದ್ದಾರೆ.

ಮಹಿಳಾ ಸಬಲೀಕರಣದ ಕ್ರಮಗಳು:

ಸ್ವಾತಂತ್ರ್ಯಾ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆ, ಸುರಕ್ಷತೆಗೆ, ಸ್ವಾಲವಂಬಿ ಜೀವನಕ್ಕೆ ಸಬಲೀಕರಣಕ್ಕೆ ಸರ್ಕಾರಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸಂವಿಧಾನಾತ್ಮಕವಾಗಿಯೂ ಮಹಿಳೆ ಸಮಾನ ಸ್ಥಾನಮಾನ ಪಡೆದಿದ್ದಾಳೆ. ಅದಾಗ್ಯೂ ಭಾರತದಲ್ಲಿ ಮಹಿಳಾ ಸಮಾನತೆ ಎಂಬುದು ಇನ್ನೂ ಮರೀಚೆಕೆ ಎಂದರೆ ತಪ್ಪಾಗಲಾರದು. ಕೌಟುಂಬಿಕ ಹಿಂಸೆ, ತಾರತಮ್ಯ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಸಬಲೀಕರಣಕ್ಕೆ ಭಾರತ ಸರಕಾರ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು.

ಸರ್ವ ಶಿಕ್ಷಾ ಅಭಿಯಾನ, ಜನನಿ ಸುರಕ್ಷಾ ಯೋಜನೆ ಇತ್ಯಾದಿ. ಈ ಕೆಳಗಿನ ಯೋಜನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವಾಲಯ ಮತ್ತು ಭಾರತ ಸರ್ಕಾರವು ಭಾರತೀಯ ಮಹಿಳೆಯರ ಸಬಲೀಕರಣಕ್ಕಾಗಿ ನಡೆಸುತ್ತಿದೆ, ಮುಂದೊಂದು ದಿನ ಭಾರತೀಯ ಸಮಾಜದಲ್ಲಿ ಮಹಿಳೆಯರು ಪುರುಷರಂತೆ ಪ್ರತಿಯೊಂದು ಅವಕಾಶದ ಪ್ರಯೋಜನವನ್ನು ಪಡೆಯುತ್ತಾರೆ ಎಂಬ ಆಶಯವಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ :

ಸುಕನ್ಯಾ ಸಮೃದ್ಧಿ ಯೋಜನೆಯು ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಪ್ರಾರಂಭಿಸಲಾದ ಯೋಜನೆಯಾಗಿದೆ.ಬಡ ಕುಟುಂಬದಲ್ಲಿ ಜನಿಸುವ ಹೆಣ್ಣು ಮಗುವಿಗೆ ಒಂದು ಸಣ್ಣ ಉಳಿತಾಯ ಠೇವಣಿ ಇಡುವ ಯೋಜನೆಯಾಗಿದೆ. ಹೆಣ್ಣು ಮಗು ಜನಿಸಿದ ನಂತರ 10 ವರ್ಷದ ಒಳಗಾಗಿ ಯಾವುದೇ ಪೋಸ್ಟ್ ಆಫೀಸ್ ಅಥವಾ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದು. ಇದಕ್ಕೆ ತಂದೆ, ತಾಯಿ ಅಥವಾ ಪೋಷಕರು ವರ್ಷಕ್ಕೆ ಎಷ್ಟಾದರೂ ಹಣ ಡೆಪಾಸಿಟ್ ಮಾಡಬಹುದು. ಈ ಹಣಕ್ಕೆ ಶೇ.8.6ರಷ್ಟು ಬಡ್ಡಿ ಬರುತ್ತದೆ. ಮತ್ತು ಬಡ್ಡಿ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಹೆಣ್ಣು ಮಗುವಿನ 10 ವರ್ಷ ತುಂಬಿದ ಬಳಿಕ ಉಳಿತಾಯ ಮಾಡಿದ ಹಣದಲ್ಲಿ ಶೇ.50ರಷ್ಟು ಹಣವನ್ನು ಶೈಕ್ಷಣಿಕ ಖರ್ಚಿಗೆ ಬಳಸಿಕೊಳ್ಳಬಹುದು. ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗ ಖಾತೆ ಚಾಲನೆಯಲ್ಲಿರುತ್ತದೆ.ಖಾತೆ ಹೊಂದಿರುವ ಹೆಣ್ಣು ಮಗುವಿನಗೆ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ.

ನಾರಿ ಶಕ್ತಿ ಪುರಸ್ಕಾರ :

1999ರಲ್ಲಿ ಜಾರಿಗೆ ತಂಡ ಯೋಜನೆ ಇದಾಗಿದ್ದು, ಮಹಿಳಾ ಸಬಲೀಕರಣಕ್ಕಾಗಿ ಶಾಶ್ವತ ಕೊಡುಗೆ ನೀಡುವ, ದುಡಿಯುವ ಹೆಣ್ಣು ಮಕ್ಕಳನ್ನು ಗುರುತಿಸಿ ನೀಡುವ ಪುರಸ್ಕಾರವಾಗಿದೆ. ಇದು ಭಾರತದಲ್ಲಿ ನೀಡಲಾಗುವು ಅತ್ಯುನ್ನತ ನಾಗರೀಕ ಗೌರವಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಮಾರ್ಚ್ 8 ರಂದು ಅರ್ಹ ಸಾಧಕಿಯರಿಗೆ ದೇಶದ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಪ್ರಶಸ್ತಿ ಪತ್ರ ಮತ್ತು ರೂ.1,00,000 ನಗದನ್ನು ಒಳಗೊಂಡಿರುತ್ತದೆ. ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ.

ಪ್ರಧಾನಮಂತ್ರಿ ಉಜ್ವಲಾ ಯೋಜನೆ :

ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಹೊಗೆಯುಕ್ತ ಅಡುಗೆಮನೆಯಿಂದ ಮುಕ್ತಿ ನೀಡಿ, ಶುದ್ಧ ಇಂಧನವನ್ನು ಒದಗಿಸುವ ಮಹತ್ತರ ಉದ್ದೇಶದಿಂದ 2016ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಳೆಯುಳಿಕೆ ಇಂಧನಗಳು ಮತ್ತು ಇತರೆ ಇಂಧನಗಳನ್ನು ಅಡುಗೆಗಾಗಿ ಬಳಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಲನ್ನು ನಿಗ್ರಹಿಸುವುದು. ಅಡುಗೆಗ ಬಳಸುವ ಅಶುದ್ಧ ಇಂಧನಗಳ ಪರಿಣಾವಾಗಿ ಸಂಭವಿಸುವ ಸಾವುನೋವುಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಸವಾಗಿದೆ.ಮಹಿಳೆಯರನ್ನು ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಯಿಂದ ರಕ್ಷಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ಅವರ ಪುನರ್ವಸತಿ ಮತ್ತು ಕಲ್ಯಾಣಕ್ಕಾಗಿಯೂ ಕೆಲಸ ಮಾಡಲಾಗುತ್ತದೆ.

ಮಹಿಳಾ ಶಕ್ತಿ ಕೇಂದ್ರ :

ಈ ಯೋಜನೆಯು ಸಮುದಾಯದ ಸಹಭಾಗಿತ್ವದ ಮೂಲಕ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ. ಇದರ ಅಡಿಯಲ್ಲಿ, ವಿದ್ಯಾರ್ಥಿಗಳು ಮತ್ತು ವೃತ್ತಿಪರರಂತಹ ಸಮುದಾಯ ಸ್ವಯಂಸೇವಕರು ಗ್ರಾಮೀಣ ಮಹಿಳೆಯರಿಗೆ ಅವರ ಹಕ್ಕುಗಳು ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಮಹಿಳಾ ಸಹಾಯವಾಣಿ ಯೋಜನೆ :

ಈ ಯೋಜನೆಯಡಿಯಲ್ಲಿ, ಮಹಿಳೆಯರಿಗೆ 24 ಗಂಟೆಗಳ ತುರ್ತು ಸಹಾಯ ಸೇವೆಯನ್ನು ಒದಗಿಸಲಾಗಿದೆ, ಮಹಿಳೆಯರು ತಮ್ಮ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ಅಥವಾ ಅಪರಾಧದ ಬಗ್ಗೆ ಈ ಯೋಜನೆಯಡಿ ಸೂಚಿಸಲಾದ ಸಂಖ್ಯೆಯಲ್ಲಿ ದೂರು ನೀಡಬಹುದು.

ಉಪಸಂಹಾರ :

ಹೆಣ್ಣೊಂದು ಕಲಿತರೆ ಶಾಲೆಯೊಂದು ತರೆದಂತೆ,ಹೆಣ್ಣಿನಿಂದ ಜಗತ್ತೀನ ಅಸ್ಥತ್ತವ ಉಳಿಯಲು ಸಾಧ್ಯ. ಜನರನ್ನು ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿಗೊಳಿಸಬೇಕಾದರೆ ಮೊದಲು ಮಹಿಳೆಯನ್ನು ಜಾಗೃತಿಗೊಳಿಸಬೇಕು. ಒಂದು ಸಲ ಮಹಿಳೆ ಪ್ರಗತಿ ಫಥದಲ್ಲಿ ಚಲಿಸಲು ಆರಂಭಿಸಿದರೆ ಈಡೀ ಕುಟುಂಬ, ಹಳ್ಳಿ ಹಾಗೂ ಸಂಪೂರ್ಣ ದೇಶದ ಪ್ರಗತಿಯಾಗುತ್ತದೆ.

FAQ

ಮಹಿಳಾ ಸಬಲೀಕರಣ ಎಂದರೇನು ?

ಯಾವುದೇ ತಾರತಮ್ಯವನ್ನು ಲೆಕ್ಕಿಸದೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡುವುದು.

ಮಹಿಳಾ ಸಬಲೀಕರಣ ಯೋಜನೆಗಳು ಯಾವಾಗ ?

ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ನಾರಿ ಶಕ್ತಿ ಯೋಜನೆ etc…

ಮಹಿಳಾ ದಿನಾಚರಣೆ ಯಾವಾಗ ?

ಮಾರ್ಚ್‌ ೮,

ಇತರೆ ಪ್ರಬಂಧಗಳು:

ಸಾವಿತ್ರಿಬಾಯಿ ಫುಲೆ ಪ್ರಬಂಧ

ಭಾರತೀಯ ಸಂಸ್ಕೃತಿ ಬಗ್ಗೆ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

Leave a Comment