ರೈತ ಮೇಲೆ ಕನ್ನಡ ಪ್ರಬಂಧ

ರೈತ ಮೇಲೆ ಕನ್ನಡ ಪ್ರಬಂಧ, Raithara Mele Kannada Prabandha farmer essay in kannada, ಭಾರತದ ರೈತರ ಜೀವನದ ಪ್ರಬಂಧ

ರೈತ ಮೇಲೆ ಕನ್ನಡ ಪ್ರಬಂಧ
ರೈತ ಮೇಲೆ ಕನ್ನಡ ಪ್ರಬಂಧ

ರೈತ ಮೇಲೆ ಕನ್ನಡ ಪ್ರಬಂಧ:

ಈ ಲೇಖನಿಯಲ್ಲಿ ರೈತರ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ, ಹಾಗೂ ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ.

ಪೀಠಿಕೆ:

ರೈತ ದೇಶದ ಬೆನ್ನಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದು ಕೃಷಿಯ ಶ್ರೇಷ್ಠತೆಯನ್ನು ಸಾರುತ್ತದೆ. ಶೇ.55 ರಷ್ಟು ಜನ ಕೃಷಿಯನ್ನೆ ಅವಲಂಬಿಸಿದ್ದಾರೆ. ಆದರೆ ಹಲಾವರು ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ,ಆರ್ಥಿಕ ನಷ್ಟವನ್ನು ಸಹಿಸಿಕೊಳ್ಳಲಾಗಿದೆ ಸಾಲದ ಹೊರೆಯಿಂದ ಹೊರ ಬರಲಾಗದೆ ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ರೈತರ ಜೀವನ:

ರೈತ ಕೃಷಿಯನ್ನು ಬಳಸಿಕೊಂಡು ಬೆಳಸಿಕೊಂಡು ಬೆಳೆಗಳನ್ನು ಬೆಳೆಯುತ್ತಾನೆ. ರೈತನ ಮೂಲ ವೃತ್ತಿಯಾದ ಕೃಷಿ ಬೇಸಾಯವನ್ನು ಮಾಡಿ ನಾಡಿನ ಸಮಸ್ತ ಕನ್ನಡಿಗರು ಆಹಾರವನ್ನು ನೀಡುತ್ತಾರೆ. ರೈತರು ಅವರ ಇಡೀ ಜೀವನ ಹೊಲ, ಗದ್ದೆ,ಬೇಸಾಯದಲ್ಲೆ ಅವರ ಜೀವನವನ್ನು ಸಾಗಿಸುತ್ತಾರೆ.

ಭಾರತದ ರೈತರು ಪ್ರಪಂಚದಾದ್ಯಂತದ ಕಠಿಣ ಶ್ರಮಿಕ ರೈತ. ಹಗಲಿರುಳು ದುಡಿದು ಬೆಳೆಗಾಗಿ ಕೃಷಿಯಲ್ಲಿ ಸದಾ ನಿರಂತರಾಗಿರುತ್ತಾರೆ. ಅವರು ಸೂರ್ಯನ ಶಾಖದ ಅಡಿಯಲ್ಲಿ ಮತ್ತು ಮಳೆಯಲ್ಲೂ ಕೆಲಸ ಮಾಡುತ್ತಾರೆ.

ಭೂಮಿಯನ್ನು ಉಳುಮೆ ಮಾಡಿ ಬೀಜ ಬಿತ್ತಿ ಬೆಳೆಗಳನ್ನು ಬೆಳೆಯುತ್ತಾರೆ.ಶ್ರಮದಿಂದ ಕೆಲಸವನ್ನು ಮಾಡುತ್ತಾರೆ. ಅವರ ಬೆಳೆಗಳಿಗೆ ಉತ್ತಮವಾದ ಬೆಲೆಯು ಸಿಗುವುದನ್ನು ಕಾಯುತ್ತಾರೆ, ಅವರ ಜೀವನಕ್ಕೆ ಆಧಾರವೆ ಕೃಷಿಯಾಗಿರುತ್ತದೆ.

ರೈತರು ಗೋವುಗಳನ್ನು ಸಾಕುತ್ತಾರೆ ಹಾಗೆ ಅವುಗಳನ್ನು ಬೇಸಾಯಕ್ಕೆ ಸಹಾಯವಾಗುತ್ತದೆ. ರೈತನು ಗೋವುಗಳನ್ನು ಸಾಕುವುದರಿಂದ ಸಾವಯವ ಗೊಬ್ಬರವಾಗುತ್ತದೆ, ಇದರಿಂದ ಬೆಳೆಗಳಿಗೆ ಅನುಕೂಲವಾಗುತ್ತದೆ.

ರೈತನು ಬೆಳಗ್ಗೆ ಬೇಗನೇ ಎದ್ದು ಅವನ ಕೆಲಸವನ್ನು ಮಾಡುತ್ತಾನೆ. ಹಗಲಿನಲ್ಲಿ ಬೇಸಾಯವನ್ನು ಮಾಡಿ ರಾತ್ರಿ ವೇಳೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾನೆ. ರೈತರ ಜೀವನ ಶ್ರಮದಾಯಕವಾದ ಜೀವನವಾಗಿದೆ.

ರೈತರ ಆರ್ಥಿಕ ಸ್ಥಿತಿ:

ರೈತರು ಬಡವರಾಗಿದ್ದಾರೆ. ನಮ್ಮ ದೇಶದ ಬೆನ್ನಲುಬು ನಮ್ಮ ರೈತ, ಇಡೀ ದೇಶಕ್ಕೆ ಅನ್ನ ಹಾಕುತ್ತಾನೆ ಅದರೆ ವಿಧಿ ಕೆಲವೊಂದು ಸಾರಿ ರೈತ ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡುತ್ತದೆ. ಬಡತನದ ಸ್ಥಿತಿ ಅವರನ್ನು ಹಾಗೆ ಮಾಡುತ್ತದೆ.

ರೈತರು ಆರ್ಥಿಕವಾಗಿ ಹಿಂದೂಳಿದುದರಿಂದ ಅವರ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಅವರ ಮಕ್ಕಳ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ರೈತರು ಹಗಲಿರುಳು ದುಡಿದರು ಅವರು ಎರಡು ಹೊತ್ತು ಊಟ ಮಾಡಿ ಒಂದು ಹೊತ್ತು ಹಾಗೆ ಮಲಗುತ್ತಾರೆ. ಅವರಿಗೆ ಅಗತ್ಯವಾದ ವಸ್ತುಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ.

ರೈತರ ಸಮಾಜಿಕ ಜೀವನ:

ಭಾರತೀಯ ರೈತರು ಎಲ್ಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅವರು ಸರಳವಾಗಿ ಆಚರಿಸುತ್ತಾರೆ. ಹಳ್ಳಿ ಹಬ್ಬಗಳು ನೋಡಲು ಚಂದ ಹಳ್ಳಿ ಜನರು ಅವರ ಕುಟುಂಬದ ಜೊತೆ ಕೂಡಿ ಆಚರಿಸುವು ಬಹಳ ಸುಂದರವಾಗಿರುತ್ತದೆ.

ರೈತನು ಮಗ ಅಥವಾ ಮಗಳ ಮದುವೆ ಮಾಡುವುದೇ ಒಂದು ಹಬ್ಬದ ಹಾಗೇ ರೈತನ ಸಂಭ್ರಮ ಹೆಚ್ಚುವುದು, ಅವರು ದೇವರ ಪೂಜೆಗಳು ಹೆಚ್ಚು ಗೌರವ ನೀಡಿ ಆಚರಿಸುತ್ತಾರೆ.

ರೈತರ ಪ್ರಾಮುಖ್ಯತೆ ಮತ್ತು ಪಾತ್ರ:

ಪ್ರತಿಯೊಬ್ಬರಿಗೂ ದೊರೆಯುವ ಬೆಳೆಕಾಳು,ದವಸ ಧಾನ್ಯ, ತರಕಾರಿಗಳನ್ನು ರೈತನು ಎಲ್ಲಾರಿಗೂ ಸುಲಭವಾಗಿ ಸಿಗುವಂತೆ ಮಾಡುತ್ತಾನೆ.ಎಲ್ಲರಗೂ ಪೂರೈಸುತ್ತಾನೆ.

ರೈತನು ದುಡಿಯುವುದರ ಜೊತೆಗೆ ಅವನ ಹೆಂತಿಯು ಕೂಡ ಹೊಲದಲ್ಲಿ ದುಡಿಯುತ್ತಾಳೆ ಅವಳು ಮನೆಯ ಎಲ್ಲ ಕೆಲಸವನ್ನು ಮಾಡಿಕೊಂಡು ಗಂಡನಿಗೆ ಸಹಾಯ ಮಾಡುತ್ತಾಳೆ. ಇಲ್ಲಿ ರೈತ ಮತ್ತು ಅವನ ಹೆಂಡತಿಯ ಪಾತ್ರ ಬಹಳ ಮುಖ್ಯವಾಗಿದೆ.

ರೈತರ ಬೆಳೆಯುವ ಬೆಳೆಗಳಿಂದಾಗಿ ದೇಶದಲ್ಲಿ ಆಹಾರವು ಎಲ್ಲರಿಗೂ ದೊರೆಯುತ್ತಿದೆ. ನಮ್ಮ ದೇಶದ ಜನರಿಗೆ ಅನ್ನ ನೀಡುವ ಮಹತ್ವದ ಕಾರ್ಯದಲ್ಲಿ ಪಾತ್ರರಾಗಿದ್ದರೆ.

ಜೀವ ಸಂಕುಲವನ್ನು ರೈತ ಕಾಪಾಡುತ್ತಿದ್ದನೆ. ರೈತರು ಆರ್ಥಿಕವಾಗಿ ಕಷ್ಟದಲ್ಲಿ ಇದ್ದರು ಅವರು ದುಡಿಯುವುದು ಬೀಡುವುದಿಲ್ಲ

ರೈತನು ಜಾನುವಾರುಗಳನ್ನು ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾನೆ.

ರೈತರ ಆತ್ಮಹತ್ಯೆಗಳು:

ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆಗಳು ಬಹಳ ಹೆಚ್ಚಾಗುತ್ತಿದೆ. ಸಾಲದ ಹೊರೆ ಹೆಚ್ಚಾದಂತೆ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಕೃಷಿ ಆಮದಿನ ಮೇಲಿನ ನಿರ್ಬಂದ ರದ್ದಾಗಿದ್ದು ದೇಶಿಯ ರೈತರು ಸಬ್ಸಿಡಿ ಬೆಂಬಲಿತ ಅಂತರಾಷ್ಟೀಯ ಕೃಷಿಯ ಉತ್ಪನ್ನಗೊಳೊಂದಿಗೆ ಸ್ವದಿಸಲಾಗದಿರುವುದು ಬೆಲೆಯು ಕುಸಿತವಾಗಿದೆ.

ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಪ್ರಕೃತಿಯ ವಿಕೋಪಗಳು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಒಂದು ಕಡೆ ಬೆಳೆದಿರುವ ಬೆಳೆಗಳಿಗೆ ಸರಿಯಾದ ಮಳೆಯು ಸಿಗದೇ ಇರುವುದರಿಂದ ಬೆಳೆಗಳು ನಾಶವಾಗುತ್ತಿದೆ. ಇನ್ನೊಂದು ಕಡೆ ಬೀರುಗಾಳಿ, ಚಂಡಮಾರುತ, ಪ್ರವಾಹಗಳಿಂದ ರೈತನ ಬೆಳೆಗಳು ನೀರಿನ ಪಾಲಾಗುತ್ತಿದೆ. ಇದರಿಂದ ಬೇಸತ್ತು ಸಾವಿಗೆ ಶರಣಾಗುತ್ತಿದ್ದಾರೆ.

ಕೃಷಿಗೆ ಬೇಕಾದ ರಸಗೊಬ್ಬರ, ಕೀಟನಾಶಕ, ಕೃಷಿ ಸಂರಕ್ಷಣೆ, ವಿದ್ಯುತ್‌, ನೀರು, ಇವುಗಳು ದುಬಾರಿ ಪರಕರಗಳಾಗಿದೆ.

ರೈತನು ಅಜ್ಞಾನದಿಂದ ಮದುವೆಗೆ ಅಧಿಕವಾಗಿ ಖರ್ಚು ಇದನ್ನು ತೀರಿಸಲಾಗದೇ ಸಾವಿಗೆ ಶರಣಾಗುತ್ತಿದ್ದಾನೆ. ಹಾಗೆ ಬೇರೆ-ಬೇರೆ ಅನೇಕ ಕಾರಣದಿಂದಾಗಿ ರೈತರು ಸಂಕಷ್ಟವನ್ನು ಎದಿರಿಸುತ್ತಿದ್ದಾರೆ.

ರೈತರ ಆತ್ಮಹತ್ಯೆ ತೆಡೆಗಟ್ಟುವ ಕ್ರಮಗಳು:

*ರೈತರ ಭೂಮಿಯಲ್ಲಿ ಯಾವುದಾದರೂ ದೋಷಗಳಿದ್ದರೆ ನುರಿತ ತಜ್ಞರಿಂದ ಪರೀಕ್ಷೆಗೊಳಪಡಿಸಿ ಸೂಕ್ತ ಸಲಹೆಗಳನ್ನು ಕೊಡುವಂತೆ ಮಾಡಬೇಕು.

*ರೈತ ಬೆಳೆದ ಬೆಳೆಗಳಿಗೆ ಸಾರಿಯಾದ ಬೆಳೆಗಳು ಸಿಗುವಂತೆ ಮಾಡುವುದು. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು, ಬಡ್ಡಿದರವನ್ನು ಕಡಿಮೆ ಮಾಡುವುದು.

*ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ರೈತರನ್ನು ಪ್ರೇರಿಪಿಸಬೇಕು.

*ಮಾದಕ ದ್ರವ್ಯವನ್ನು ಕಡಿಮೆ ಮಡುವುದರಿಂದ ರೈತರನ್ನು ಸಾವಿನಿಂದ ಉಳಿಸಲು ಸಾಧ್ಯವಾಗುತ್ತದೆ.

*ನೀರಾವರಿ, ವಿದ್ಯುತ್‌, ಬೀಜಗಳು, ರಸಗೊಬ್ಬರ ಮತ್ತು ಕೃಷಿ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವುದು.

ಉಪಸಂಹಾರ:

ಗ್ರಾಮೀಣ ಭಾಗದಲ್ಲಿ ಬದಲಾವಣೆಗಳು ಅಗುತ್ತಿದೆ, ಅದರೂ ಇನ್ನೂ ಬದಲಾವಣೆಗಳು ಅಗಬೇಕು. ಅನ್ನದಾತರಾದ ರೈತರು ಆರ್ಥಿಕರಾಗಿ ಸಧೃಢರಾಗಬೇಕು ಹಾಗೂ ನೈಸರ್ಗಿಕ, ಸಾವಯುವ ಕೃಷಿಗೆ ಒತ್ತು ನೀಡಬೇಕು.ನಮ್ಮ ಸರಕಾರವು ರೈತರಿಗೆ ಅನುಕೂಲಕರವಾದ ಯೋಜನೆಗಳನ್ನು ರೂಪಿಸಿ, ವ್ಯಾವಸಾಯವನ್ನು ಅಭಿವೃದ್ದಿಗೊಳಿಸಬೇಕು.

FAQ

ರೈತ ಸಿರಿ ಯೋಜನೆ ಜಾರಿಗೆ ಬಂದಿದ್ದು ಯಾವಾಗ?

2019-20 ಸಾಲಿನಲ್ಲಿ ಯೋಜನೆ ಜಾರಿಗೆ ಬಂದಿದೆ.

ರೈತ ಮಿತ್ರ ಯಾರು?

ರೈತರ ಮಿತ್ರ ಎರೆಹುಳು.

ಇತರೆ ಪ್ರಬಂಧಗಳು:

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ದೀಪಾವಳಿ ಬಗ್ಗೆ ಪ್ರಬಂಧ

Leave a Comment