ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts Names in Kannada

ಕರ್ನಾಟಕದ 31 ಜಿಲ್ಲೆಗಳ ಹೆಸರು, Karnataka 31 Districts Names in Kannada, karnataka 31 districts names information in kannada, 31 districts of karnataka

ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada

ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada

ಈ ಲೇಖನಿಯಲ್ಲಿ ಕರ್ನಾಟಕದ 31 ಜಿಲ್ಲೆಗಳ ಹೆಸರುಗಳನ್ನು ನಾವು ನಿಮಗೆ ಅನುಕೂಲವಾಗುವಂತೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

Karnataka 31 Districts Names in Kannada

1.ಉಡುಪಿ

  • ಇಲ್ಲಿ ಕನಕನ ಕಿಂಡಿ ಇದೆ.
  • ಇದು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
  • ಇಲ್ಲಿ ಮಣಿಪಾಲ್‌ ವಿಶ್ವವಿದ್ಯಾಲಯವಿದೆ.
  • ಇಲ್ಲಿ ಸಿಂಡಿಕೇಟ್‌ ಬ್ಯಾಂಕ್ ನ್ನು ೧೯೨೫ರಲ್ಲಿ ಸ್ಥಾಪಿಸಲಾಯಿತು.

2.ಶಿವಮೊಗ್ಗ

  • ಇಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಇದೆ.
  • ಮಹಾತ್ಮ ಗಾಂಧಿ ಜಲವಿದ್ಯುತ್‌ ಕೇಂದ್ರವು ಶರಾವತಿ ನದಿಗೆ ಸಂಬಂಧಿಸಿದೆ.
  • ಇಲ್ಲಿ ಶಿವಪ್ಪನಾಯಕನ ಅರಮನೆ ಇದೆ.
  • ಜೋಗ ಜಲಪಾತವು ಶರಾವತಿ ನದಿಯಿಂದ ಸೃಷ್ಠಿಯಾಗಿದೆ.

3.ದಾವಣಗೆರೆ

  • ಇದಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್‌ ಎಂದು ಕರೆಯಲಾಗುತ್ತದೆ.
  • ದಾವಣಗೆರೆ ವಿಶ್ವವಿದ್ಯಾಲಯ ಇದೆ. ಇದರ ಧ್ಯೇಯವಾಕ್ಯ: ತಮಸೋಮ ಜ್ಯೋತಿರ್ಗಮಯ
  • ಇಲ್ಲಿ ಸಮಗ್ರ ಅಂಗವೀಕಲರ ಪುನರ್ವಸತಿ ಪ್ರಾದೇಶಿಕ ಕೇಂದ್ರವಿದೆ.

4.ಚಿತ್ರದುರ್ಗ

  • ಹೈದರಲಿ ಸೈನಿಕರು ಚಿತ್ರದುರ್ಗ ಕೋಟೆಯನ್ನು ಮುತ್ತಿದಾಗ ಅಲ್ಲಿನ ಪಾಳೆಗಾರ ರಾಜ ವೀರ ಮದಕರಿ ನಾಯಕ ಅಗಿದ್ದ.
  • ಮೊಳಕಾಲ್ಮೂರು ರೇಷ್ಮೆಗೆ ಹೆಸರುವಾಸಿಯಾಗಿದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ತಾಮ್ರ ಉತ್ಷಾದನೆ ಮಾಡುವ ಜಿಲ್ಲೆಯಾಗಿದೆ.

5.ಉತ್ತರಕನ್ನಡ

  • ಮುಂಡಗೋಡ ಎಂಬ ಊರು ಟಿಬೇಟಿಯನ್ನರ ಮರುವಸತಿ ಕೇಂದ್ರವಾಗಿದೆ.
  • ಕಾರವಾರದಲ್ಲಿ ಸೀಬರ್ಡ್‌ ನೌಕಾನೆಲೆ ಇದೆ.
  • ಸೀಬರ್ಡ್‌ ನೌಕಾನೆಲೆಯನ್ನು INS ಕದಂಬ ನೌಕಾನೆಲೆ ಎಂದು ಕರೆಯಲಾಗುತ್ತದೆ.
  • ಕಾರವಾರ ರವೀಂದ್ರನಾಥ ಟಾಗೋರ್‌ ಬೀಚ್‌ ಇದೆ.

6.ದಕ್ಷಿಣಕನ್ನಡ

  • ನವಮಂಗಳೂರು ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
  • ದಕ್ಷಿಣ ಕನ್ನಡ ಜಿಲ್ಲೆಯು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
  • ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕ್ರೀಡೆ-ಕಂಬಳ

7.ಚಿಕ್ಕಮಗಳೂರು

  • ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
  • ಇಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆ ಇದೆ.
  • ಕುದುರೆ ಮುಖ ರಾಷ್ಟೀಯ ಉದ್ಯಾನವನ ಇದೆ. ಇದು ಭದ್ರಾ ನದಿ ದಂಡೆಯ ಮೇಲೆ ಇದೆ.

8.ತುಮಕೂರು

  • ಮಾರ್ಕೋನಹಳ್ಳಿ ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  • ಕರ್ನಾಟಕದ ಅತೀ ಹೆಚ್ಚು ಕೆಂಪು ಮಣ್ಣು ಹೊಂದಿದೆ.
  • ಕಣಿಕಲ್‌ ನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.

9.ಕೊಡಗು

  • ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
  • ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ.
  • ಇದನ್ನು ಕರ್ನಾಟಕ ಕಾಶ್ಮೀರ ಎಂದು ಕರೆಯಲಾಗುತ್ತದೆ.
  • ಇಲ್ಲಿ ಹಾರಂಗಿ ಜಲಾಶಯ ಇದೆ.

10.ಹಾಸನ

  • ಶ್ರವಣಬೆಳಗೊಳವನ್ನು ಜೈನರ ಕೇಂದ್ರ ಎಂದು ಕರೆಯುತ್ತಾರೆ.
  • ಶ್ರವಣಬೆಳಗೊಳದಲ್ಲಿ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.
  • ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಕ್ರೋಮಿಯಂ ಉತ್ಪಾದಿಸುತ್ತದೆ.

11.ಮೈಸೂರು

  • ಮೈಸೂರಿನ ತಲಕಾಡು ದೇವಾಲಯಗಳನ್ನು ಜಖಣಾಚಾರಿ ರಚಿಸಿದನು.
  • ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿದೆ.
  • ಕರ್ನಾಟಕದ ಅತೀ ದೊಡ್ಡ ದೇವಾಲಯ ನಂಜನಗೂಡಿನ ನಂಜುಡೇಶ್ವರ ದೇವಾಲಯ.

12.ಚಾಮರಾಜನಗರ

  • ಇದು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಜಿಲ್ಲೆಯಾಗಿದೆ.
  • ಬಿಳಿಗುಂಡ್ಲು ಎಂಬಲ್ಲಿ ಕಾವೇರಿ ಜಲಮಾಪನ ಕೇಂದ್ರ ಇದೆ.
  • ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ನೀರನ್ನು ಬಿಳಿಗುಂಡ್ಲು ಎಂಬ ಪ್ರದೇಶದಲ್ಲಿ ಅಳೆಯಲಾಗುವುದು.

13.ಬೀದರ್‌

  • ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್‌ ರವರು ಬೀದರ್‌ ಜಿಲ್ಲೆಗೆ ಭೇಟಿಕೊಟ್ಟಿದ್ದರು. ಇಲ್ಲಿ ಗುರುನಾನಕ್‌ ಝರಾ ಇದೆ.
  • ಸೋಲಾ ಕಂಬ ಮಸೀದಿ ಇದೆ.
  • ವೈಮಾನಿಕ ತರಬೇತಿ ಕೇಂದ್ರವಿದೆ.

14.ಕಲಬುರಗಿ

  • ಇಲ್ಲಿ ಸನ್ನತಿ ಎಂಬ ಸ್ಥಳ ಇದೆ.
  • ಸನ್ನತಿಯು ಭೀಮಾ ನದಿ ದಂಡೆಯ ಮೇಲಿದೆ.
  • ಸನ್ನತಿಯಲ್ಲಿ ಬೌದ್ಧರ ಸ್ಮಾರಕಗಳು ಇವೆ.
  • ಸನ್ನತಿಯಲ್ಲಿ ಮೌರ್ಯರ ಅರಸ ಅಶೋಕನ ಶಾಸನಗಳಿವೆ.

15.ಯಾದಗಿರಿ

  • ಗೋಗಿಯಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ.
  • ಯಾದಗಿರಿ, ಸುರಪುರ, ಶಹಾಪುರ, ಎಂಬ ಮೂರು ತಾಲೂಕುಗಳನ್ನು ಒಳಗೊಂಡಿದೆ.
  • ಇದು ಕಾಕತೀಯ ರಾಜರ ಆಳ್ವಿಕೆಗೆ ಒಳಪಟ್ಟಿತ್ತು.

16.ರಾಯಚೂರು

  • ಇಲ್ಲಿ ಐ.ಐ.ಐ.ಟಿ.ಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
  • ಇಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಉಷ್ಣವಿದ್ಯುತ್‌ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.

17.ವಿಜಯಪುರ

  • ಇದನ್ನು ಕರ್ನಾಟಕದ ಪಂಜಾಬ್‌ ಎಂದು ಕರೆಯುತ್ತಾರೆ.
  • ಇಲ್ಲಿ ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪಿಸಲಾಗಿದೆ.
  • ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.

18.ಬಾಗಲಕೋಟೆ

  • ನವನಗರ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ.
  • ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು. ಬಾದಾಮಿಯ ಹಳೆಯ ಹೆಸರು ವಾತಾಪಿ.
  • ಬಾದಾಮಿಯಲ್ಲಿರುವ ಕಪ್ಪೆ ಅರಭಟ್ಟನ ಶಾಸನವು ತ್ರಿಪದಿಯಲ್ಲಿದೆ.

19.ಕೊಪ್ಪಳ

  • ಇಲ್ಲಿಯ ಸುವರ್ಣ ಗಿರಿ ಅಥವಾ ಕನಕಗಿರಿ ಮೌರ್ಯರ ದಕ್ಷಿಣ ರಾಜಧಾನಿ ಅಗಿತ್ತು.
  • ರಾಯಚೂರು ಜಿಲ್ಲೆಯಿಂದ ೧೯೯೭ ರಲ್ಲಿ ಪ್ರತ್ಯೇಕವಾಗಿದೆ
  • ಆನೆಗುಂದಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು.
  • ಇಲ್ಲಿ ಅಂಜನಾದ್ರಿ ಬೆಟ್ಟವಿದೆ.

20.ಬಳ್ಳಾರಿ

  • ೧೯೫೬ಕ್ಕಿಂತ ಮುಂಚೆ ಮದ್ರಾಸ ಪ್ರಾಂತ್ಯದಲ್ಲಿತ್ತು.
  • ೧೯೩೨ರಲ್ಲಿ ಕರ್ನಾಟಕದಲ್ಲೆ ಪ್ರಥಮವಾಗಿ ವಿಮಾನ ಸಂಪರ್ಕ ಪಡೆದ ಸ್ಥಳವಾಗಿದೆ.
  • ಇಲ್ಲಿ ದರೋಜಿ ಕರಡಿ ಧಾಮ ಇದೆ.

21.ಗದಗ

  • ಇಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.
  • ಇಲ್ಲಿ ಮಾಗಡಿ ಪಕ್ಷಿಧಾಮವಿದೆ. ಇದನ್ನು ಗದುಗಿನ ಪಕ್ಷಿಕಾಶಿ ಎನ್ನುವರು.
  • ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಭೀಮ್ ರಾವ್.

22.ಧಾರವಾಡ‌

  • ಕರ್ನಾಟಕದಲ್ಲಿ ಹೋಂ ರೂಲ್‌ ಚಳುವಳಿ ಧಾರವಾಡದಿಂದ ಪ್ರಾರಂಭವಾಯಿತು.
  • ಇಲ್ಲಿ ಹೈಕೋರ್ಟ್‌ ಪೀಠವನ್ನು ೨೦೦೮ ಜುಲೈ ೪ ರಂದು ಸ್ಥಾಪಿಸಲಾಗಿದೆ.
  • ಕೃಷಿ ವಿಶ್ವವಿದ್ಯಾಲಯ ಇದೆ.

23.ಬೆಳಗಾವಿ

  • ಇಲ್ಲಿ ರಾಜಾ ಲಕ್ಕಮ್ಮಗೌಡ ಅಣೆಕಟ್ಟು ಇದೆ. ಇದನ್ನು ಘಟಪ್ರಭಾ ನದಿಗೆ ಕಟ್ಟಲಾಗಿದೆ. ಇದನ್ನು ಹಿಡಕಲ್‌ ಅಣೆಕಟ್ಟು ಎಂದು ಸಹ ಕರೆಯುತ್ತಾರೆ.
  • ಇಲ್ಲಿ ನವಿಲುತೀರ್ಥ ಅಣೆಕಟ್ಟನ್ನು ಮಲಪ್ರಭಾ ನದಿಗೆ ಕಟ್ಟಲಾಗಿದೆ.
  • ಇಲ್ಲಿ ಸಾಂಬ್ರಾ ವಿಮಾನ ನಿಲ್ಧಾಣವಿದೆ.

24.ಹಾವೇರಿ

  • ರಾಣಿಬೆನ್ನೂರು ಎಂಬಲ್ಲಿ ಕೃಷ್ಣ ಮೃಗ ವನ್ಯಧಾಮ ಇದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಕಪ್ಪು ಮಣ್ಣು ಹೊಂದಿದ ಜಿಲ್ಲೆಯಾಗಿದೆ
  • ಕರ್ನಾಟಕದಲ್ಲಿ ಅತೀ ಹೆಚ್ಚು ಹತ್ತಿಯನ್ನು ಬೆಳೆಯುವ ಜಿಲ್ಲೆಯಾಗಿದೆ.

25.ಮಂಡ್ಯ

  • ಇಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ.
  • ಶಿವಪುರ ಸತ್ಯಾಗ್ರಹವು ೧೯೩೮, ಎಪ್ರಿಲ್‌ ೧೧ ರಲ್ಲಿ ನಡೆಯಿತು.
  • ಇಲ್ಲಿ ಕರಿಘಟ್ಟ ಗಿರಿಧಾಮವಿದೆ. ಇದರಲ್ಲಿ ಲೋಕಪಾವನಿ ನದಿ ಹರಿಯುತ್ತದೆ.

26.ರಾಮನಗರ

  • ಇಲ್ಲಿ ರಾಮದೇವ ಬೆಟ್ಟವು ರಣಹದ್ದುಗಳಿಗೆ ಹೆಸರುವಾಸಿಯಾಗಿದೆ.
  • ಭಾರತದ ಏಕಮಾತ್ರ ಹದ್ದುಗಳ ಆಭಯಾಶ್ರಮ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿದೆ.
  • ಸಾಲುಮರದ ತಿಮ್ಮಕ್ಕರವರು ರಾಮನಗರ ಜಿಲ್ಲೆಯವರು.

27.ಬೆಂಗಳೂರು ನಗರ

  • ಇದರ ಸ್ಥಾಪಕ- ಒಂದನೆಯ ಕೇಂಪೆಗೌಡ
  • ಇಲ್ಲಿ ಫ್ರೀಡಂ ಪಾರ್ಕ ಇದೆ.
  • ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾಗಿದೆ (ವಿಸ್ತೀರ್ಣದಲ್ಲಿ)
  • ಇಲ್ಲಿ ಇಸ್ರೋದ ಕೇಂದ್ರ ಕಛೇರಿ ಇದೆ.

28.ಕೋಲಾರ

  • ಇದು ಗಂಗರ ಮೊದಲ ರಾಜಧಾನಿಯಾಗಿತ್ತು.
  • ಇಲ್ಲಿಯ ಶಿಡ್ಲಘಟ್ಟ ನಗರವು ರೇಷ್ಮೆಗೆ ಹೆಸರುವಾಸಿಯಾಗಿದೆ.
  • ಇದರ ಮೊದಲ ಹೆಸರು ಕುವಲಾಲ
  • ಇಲ್ಲಿ ಅಶೋಕನ ಕಿರಿಯ ಶಿಲಾಶಾಸನ ಶೋಧಿಸಲ್ಪಟ್ಟಿದೆ

29.ಚಿಕ್ಕಮಂಗಳೂರು

  • ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
  • ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
  • ಭಾರತದಲ್ಲಿ ಕಾಫಿಯ ಜನ್ಮಸ್ಥಳ- ಚಿಕ್ಕಮಗಳೂರು
  • ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಇದೆ. ಇದು ಭದ್ರಾ ನದಿ ದಂಡೆಯ ಮೇಲೆ ಇದೆ.

30.ಬೆಂಗಳೂರು ಗ್ರಾಮಾಂತರ

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೊಡ್ಡ ಬಳ್ಳಾಪುರವು ರೇಷ್ಮೆಗೆ ಹೆಸರುವಾಸಿಯಾಗಿದೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ ೧೭೫೦ ನವೆಂಬರ್‌ ೨೦ ಜನಿಸಿದರು.

31. ಚಿಕ್ಕ ಬಳ್ಳಾಪುರ

  • ಇಲ್ಲಿಯ ವಿಧುರಾಶ್ವತ್ಥ ಎಂಬ ಸ್ಥಳವು ಕರ್ನಾಟಕದ ಜಲಿಯನ್‌ ವಾಲಾಬಾಗ್‌ ಎಂದು ಕರೆಯಲಾಗುತ್ತದೆ. ಹೀಗೆ ಕರೆದವರು ಪಟ್ಟಾಭಿ ಸೀತಾರಾಮಯ್ಯನವರು.
  • ವಿಧುರಾಶ್ವತ್ಥ ದುರಂತವು ೧೯೩೮ ಎಪ್ರಿಲ್‌ ೨೫ ರಂದು ನಡೆಯಿತು.
  • ಇಲ್ಲಿ ಟಿಪ್ಪು ಡ್ರಾಪ್‌ ಎಂದು ಪ್ರಸಿದ್ಧಿಯಾಗಿರುವ ನಂದಿ ಬೆಟ್ಟ ಇದೆ.

ಇತರೆ ಪ್ರಬಂಧಗಳು:

ಕನ್ನಡ ರಾಜ್ಯೋತ್ಸವ ಮೇಲೆ ಕನ್ನಡ ಪ್ರಬಂಧ

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ

Leave a Comment