ಅತಿಯಾಸೆ ಗತಿ ಕೇಡು | Athiyase Gathigedu in Kannada

ಅತಿಯಾಸೆ ಗತಿ ಕೇಡು, Athiyase Gathigedu in Kannada, Exhaustion Information in Kannada, Athiyase Gathigedu Information in Kannada

ಅತಿಯಾಸೆ ಗತಿ ಕೇಡು

ಈ ಲೇಖನಿಯಲ್ಲಿ ಅತಿಯಾಸೆ ಗತಿ ಕೇಡು ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ಈ ಮಾಹತಿ ನಿಮಗೆ ತುಂಬಾ ಅನುಕೂಲವಾಗುತ್ತದೆ.

ವೇದಾ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಇದೆ. ಗಾದೆಗಳನ್ನು ಹಿರಿಯರ ನುಡಿಗಟ್ಟು, ಹಿರಿಯರು ಹಿಂದೆ ಹೇಳಿರುವ ಮಾತುಗಳೇ ಗಾದೆ.

ಅತಿಯಾಸೆ ಗತಿ ಗೇಡು ಎಂಬ ಗಾದೆ ಮಾತು ಎಲ್ಲರಿಗೂ ಅನ್ವಯಿಸುತ್ತದೆ. ಮನುಷ್ಯನಿಗೆ ಆಸೆ ಇರಬೇಕು, ಆಸೆ ಮನುಷ್ಯನ ಪ್ರವೃತ್ತಿ, ಅದು ಅತಿಯಾಗಬಾರದು. ಮನುಷ್ಯನಿಗೆ ಒಂದು ಪಡೆದ ನಂತರ ಮತ್ತೆ ಮತ್ತೆ ಹೆಚ್ಚು ಪಡೆಯುವ ಯೋಚನೆ ಅವನ ಜೀವನಕ್ಕೆ ಸಾಕಗಿದ್ದರು ಹೆಚ್ಚು ಗಳಿಸುವ ಹಂಬಲವಾಗಿದೆ. ಜನರು ಅತಿಯಾದ ಆಸೆಯಿಂದ ಅವರ ಜೀವನದ ಅಮೂಲ್ಯವಾದ ಕ್ಷಣಗಳನ್ನು ಮರೆಯುತ್ತಾರೆ.

ಜನರು ಅವರಿಗೆ ಹಣ ಬರುತ್ತಿದ್ದರು ಲಂಚವನ್ನು ಪಡೆಯುವುದು, ಹಾಗೆ ಕೆಲವರು ಹಣದ ಆಸೆಗೆ ಕಾನೂನು ಬಹಿರ ಕೆಲಸ ಮಾಡುತ್ತಾರೆ. ಅವರ ಅತಿಯಾದ ಆಸೆಗಳು ಅವರ ಜೀವನವನ್ನು ಕತ್ತಲೆ ಕೋಣೆಯಲ್ಲಿ ಕಳೆಯುವಂತೆ ಅಗುತ್ತದೆ.

ಮನುಷ್ಯನ ಆಸೆಗೆ ಮಿತಿಯಲ್ಲ ಎಷ್ಟು ಪಡೆದರು, ಇನ್ನು ಪಡೆಯುವ ಅತಿಯಾದ ಆಸೆ ಮನುಷ್ಯರಿಗೆ. ಅತಿಯಾಸೆ ದುಃಖಕ್ಕೆ ಮೂಲವಾಗುತ್ತದೆ. ಮನುಷ್ಯ ಅತಿಯಾಸೆಯಿಂದ ನೆಮ್ಮದಿ ಕಳೆದುಕೊಳ್ಳುತ್ತಾನೆ. ಅವನ ಪಾಲಿಗೆ ಅಮೃತವು ಕೂಡ ವಿಷವಾಗುತ್ತದೆ. ಆಸೆ ಇರಬೇಕು ಅದೇ ಅತಿಯಾದರೆ ಬಹಳ ಕೆಟ್ಟದ್ದು.

ಅತಿಯಾಸೆ ಗತಿ ಕೇಡು ಎಂಬುವುದು ನಿಜಾ. ಅತಿಯಾದ ಆಸೆ ದುಃಖವನ್ನು ಉಂಟು ಮಾಡುತ್ತದೆ. ಆಸೆಗೆ ಮಿತಿ ಇರಬೇಕು.

ಇತರೆ ಪ್ರಬಂಧಗಳು:

ಇಂಧನ ಸಂರಕ್ಷಣೆ ಪ್ರಬಂಧ

ಕನ್ನಡ ಗಾದೆಗಳು ಮತ್ತು ವಿವರಣೆ

Leave a Comment