ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಟಿಸಂ, ಬೌದ್ದಿಕ ವಿಕಲತೆ, ಹಾಗೂ ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆಗಂತಹ ಬಹುವಿಧ ಅಂಗವಿಕಲತೆಗಳಿಂದ ಬಳಲುತ್ತಿರುವ, 75% ಕ್ಕಿಂತ ಹೆಚ್ಚಿನ ವಿಕಲತೆ ಪ್ರಮಾಣ ಹೊಂದಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿಮಾಸ ರೂ.1000 ಪ್ರೋತ್ಸಾಹಧನ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ತಾಲೂಕಿನ ಸಂಬಂಧಪಟ್ಟ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ಗ್ರಾಮ ಪಂಚಾಯತ್), ನಗರ ಪುನರ್ವಸತಿ ಕಾರ್ಯಕರ್ತರು ಅಥವಾ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ, ನಿಗದಿತ ನಮೂನೆಯ ಅರ್ಜಿ ಪಟವನ್ನು ಪಡೆದು, ಸಂಪೂರ್ಣ ಮಾಹಿತಿ ಸೇರಿದಂತೆ ಸರಿಯಾಗಿ ಭರ್ತಿ ಮಾಡಬೇಕು. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಸರ್ಕಾರದ ಪ್ರೋತ್ಸಾಹಧನ ಯೋಜನೆಯ ಲಾಭವನ್ನು ಪಡೆಯಿರಿ
ಅರ್ಜಿಗೆ ಜೋಡಿಸಬೇಕಾದ ಅಗತ್ಯ ಡಾಕ್ಯುಮೆಂಟುಗಳು ಈ ಕೆಳಗಿನಂತಿವೆ:
- ವಿಕಲಚೇತನ ಮತ್ತು ಆರೈಕೆದಾರರ ಆಧಾರ್ ಕಾರ್ಡ್ನ ನಕಲು ಪ್ರತಿಗಳು
- ಮಾನ್ಯ ಪ್ರಾಧಿಕಾರದಿಂದ ಪಡೆಯಲಾದ ಯುಡಿಐಡಿ (UDID) ಕಾರ್ಡ್
- ಸಕ್ರಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
- ಪ್ರಸ್ತುತ ವಾಸಸ್ಥಳದ ಪ್ರಮಾಣಪತ್ರ
- ಆರೈಕೆದಾರರ ಬ್ಯಾಂಕ್ ಪಾಸ್ ಬುಕ್ನ ಪ್ರತಿ
- ಅರ್ಹತೆಯ ದೃಢೀಕರಣಕ್ಕಾಗಿ 2 ಜಂಟಿ ಭಾವಚಿತ್ರಗಳು (ವಿಕಲಚೇತನ ಮತ್ತು ಆರೈಕೆದಾರ)
ಸಂಪರ್ಕಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ವಿವರಗಳು:
📞 ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ (ಶಿವಮೊಗ್ಗ): 08182-251676
ತಾಲೂಕಾವಾರು ಸಂಪರ್ಕ ಅಧಿಕಾರಿ ವಿವರಗಳು:
- ಶಿವಮೊಗ್ಗ: ಡಿ. ಎಸ್. ಮಲ್ಲಿಕಾರ್ಜುನ – 📱 99801 50110
- ಭದ್ರಾವತಿ: ದಿನೇಶ್ – 📱 78991 37243
- ಶಿಕಾರಿಪುರ: ಎಂ. ಹುಚ್ಚರಾಯಪ್ಪ – 📱 97411 61346
- ಸಾಗರ: ಕೆ. ಎನ್. ಶ್ಯಾಮ್ ಸುಂದರ್ – 📱 95352 47757
- ಸೊರಬ: ಹೆಚ್. ಸಿ. ಭರತ್ ಕುಮಾರ್ – 📱 91104 93122
- ತೀರ್ಥಹಳ್ಳಿ: ಬಿ. ಆರ್. ದಿನಾಕರ – 📱 94807 67638
- ಹೊಸನಗರ: ರವಿಕುಮಾರ್ – 📱 97319 22693